ಭಾನುವಾರ, ಅಕ್ಟೋಬರ್ 16, 2011
ಕಂದವ ಭಾಮಿನಿಯ
ಭಾನುವಾರ, ಸೆಪ್ಟೆಂಬರ್ 25, 2011
This blog has evolved into http://padyapaana.com
If you have any problems there, please mail rkekkar@gmail.com
ಈ ಬ್ಲಾಗನ್ನು ಇನ್ನೂ ಹೆಚ್ಚು ಮಂದಿಗೆ ಉಪಯೋಗಕ್ಕೆ ಬರುವಂತೆ ಮಾಡಲು, ಪದ್ಯಪಾನ ಎಂಬ ಹೆಸರಿನ ಇನ್ನೊಂದು ವೆಬ್ ಸೈಟನ್ನು ಏರ್ಪಡಿಸಿದ್ದೇವೆ. ದಯವಿಟ್ಟು, ಅಲ್ಲಿ ಬನ್ನಿ. ಹೊಸ ವಿಳಾಸ :: http://padyapaana.com
ಆ ಸೈಟಿನಲ್ಲಿ, ನಿಮಗೆ ಏನಾದರುತೊಡಕಾದರೆ ಇವರನ್ನು ಸಂಪರ್ಕಿಸಿ :: rkekkar@gmail.com
ಬುಧವಾರ, ಸೆಪ್ಟೆಂಬರ್ 14, 2011
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆ
ಬರಿಯ ಭಾಮಿನಿಯಲ್ಲಿ ಸಾಗು-
ತ್ತಿರುವ ಕಾವ್ಯಕುತೂಹಲದಿ ಜನ
ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
ತರದೆ ಭಾಮಿನಿಯನ್ನು ನೋಡರು
ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್"!!
ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!
ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
ಮೂಡುವೆಣ್ಣಿನ ಕೆಂಪು ರಸವಾಗಿರೆ
ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
ನೋಡಿ ನಸುಕಿನ ಕವನ ನವನವೀನ
ಭಾನುವಾರ, ಸೆಪ್ಟೆಂಬರ್ 11, 2011
ಸಮಸ್ಯೆ: ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ
ಇನ್ನೊಂದು ಸಮಸ್ಯೆ :)
ರಾಮಗಾಗದ ಕಾರ್ಯ ಕಪಿಗಳಗುಂಪಿಗತಿಸುಲಭ
ಬುಧವಾರ, ಸೆಪ್ಟೆಂಬರ್ 7, 2011
ಸಮಸ್ಯೆ - "ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"
ಕೆಳೆಹಿತದಧಮ ಹಿರಿದುಕಾಂಬುಗೆ
ಕಳೆಹಿತದಭಾಮಿನಿಯು ಶರಣಗೆ ದಾರಿ ತೋರುವಳು
ತಳೆದೆನೀಗಲೆ ಕಾವ್ಯ ಸಂಶಯ
ಗೆಳೆಯಹಿತಜನರಿದನು ಪರಿಕಿಸಿ
"ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"
ಮೊದಲು, ಸಮಸ್ಯೆಯನ್ನು
"ನಳನಳಿಸದೆಯೆ ಸೋತರವರು ಪ್ರಕೃತೀಶ್ವರರು"
ಎಂಬುದಾಗಿರಿಸಿದ್ದೆ. ಅದರಲ್ಲಿ ಚ್ಛಂದೋದೋಷವಿತ್ತು.
ಗಣೇಶರ ಸಲಹೆಯಂತೆ, ಅದನ್ನು ಬದಲಿಸಿದ್ದೇನೆ.
ಸಮಸ್ಯೆ - ಭಾಮಿನಿಯಲ್ಲಿ ಕೊನೆಯ ಸಾಲು ಬರುವಂತೆ
"ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"
ಶನಿವಾರ, ಸೆಪ್ಟೆಂಬರ್ 3, 2011
ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ
ಇನ್ನೊಂದು ಸಮಸ್ಯೆ...
"ಅದಿರಿನೊಳು ಹುದುಗಿಸಿದ ಕಥೆಯಂಕುರವ ವಾಲ್ಮೀಕಿ"
ನಾಳೆ ಭಾನುವಾರವಿದೆ... ಎಲ್ಲರು ಪ್ರಯತ್ನಿಸಬೇಕಾಗಿ ವಿನಂತಿ :)
ನಾಳೆ ರಾತ್ರಿ ನನ್ನ ಪರಿಹಾರ post ಮಾಡುತ್ತೇನೆ
ಗುರುವಾರ, ಸೆಪ್ಟೆಂಬರ್ 1, 2011
ಸಮಸ್ಯೆ - "ರಾವಣಾಗಮನವನುಕಾದಳುಸೀತೆಕಾತುರದಿ"
ಭಾವ ಕಲಕುವ ಸಾಲು ಕಂಡೆವು
"ರಾವಣಾಗಮನವನುಕಾದಳುಸೀತೆಕಾತುರದಿ"
ತಾವು ಕಾವ್ಯದಿ ಚತುರ ಮತಿಗಳು
ಸಾವಕಾಶದಲಿದನು ಚಿಂತಿಸಿ
ಬೇವಸಾಲಿಗೆಬೆಲ್ಲಬೆರೆಸುತಹಿತವನುಣಿಸುವಿರಾ?
ಭಾಮಿನಿ ಕೊನೆ ಸಾಲು - "ರಾವಣಾಗಮನವನುಕಾದಳುಸೀತೆಕಾತುರದಿ"
ಮಂಗಳವಾರ, ಆಗಸ್ಟ್ 30, 2011
ವರ್ಣಚ್ಯುತಕ : ಚಿತ್ರಕವಿತ್ವದ ಒಂದು ಸರಳ ಪ್ರಯೋಗ
ನಗಜೆ ಭೂಮಿ ಲಕ್ಷ್ಮಿ ಪೆಸರ
ಸೇರಿಸಿದರೆ ನಾಲ್ಕಕ್ಷರ
ಕೊನೆಗೆಸೇರೆ ಒಂದಕ್ಷರ
ಹೆಸರೊಂದೇ ಐದಕ್ಷರ
ಎಡದಕ್ಷರವೂಂದೊಂದನು
ತೆಗೆದು ನೋಡಿ ಚೋದ್ಯವಿದನು
ಗಣಪ ಬ್ರಹ್ಮ ಷಣ್ಮುಖರು
ಮನ್ಮಥನಗ್ನಿಯು ಬಹರು
ಈ ವರ್ಣಚ್ಯುತಕದ ಸೂಚನೆ ಹೀಗಿದೆ.
ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಶರದಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳಾಗುತ್ತವೆ. ಈ ಐದಕ್ಷರದ ಪದದ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ, ಬೇರೆ ಐವರ ಹೆಸರುಗಳು, ಅಂದರೆ, ಗಣೇಶ, ಬ್ರಹ್ಮ ಷಣ್ಮುಖ, ಮನ್ಮಥ ಮತ್ತು ಅಗ್ನಿ ಇವರ ಹೆಸರುಗಳು ಲಭ್ಯ. ಹಾಗಾದರೆ ಆ ಐದಕ್ಷರದ ಪದ ಯಾವುದು
ಭಾನುವಾರ, ಆಗಸ್ಟ್ 28, 2011
ಸಮಸ್ಯೆ, ಭಾಮಿನಿ ಕೊನೆ ಸಾಲು: ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ :)
ಅರಿಗಳಿಗೆ ಶಸ್ತ್ರಗಳ ವಿತರಿಸಲಧಿಪ ಮೊದಲಾದ
ಬುಧವಾರ, ಆಗಸ್ಟ್ 24, 2011
ಪದ್ಯರಚನೆಗೆ ಕೈಪಳಗಲು ಮತ್ತೊಂದು ಸಮಸ್ಯೆ: ಭಾಮಿನೀ ಛಂದ
"ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು" (ಕೊನೆಯ ಸಾಲು)
ಶ್ರೀಶ ರಾಮ ಸೋಮ ಕಾಂಚನೇತರರೂ ಸಹ ಮೊದಲಿಡಬಹುದು
ಭಾನುವಾರ, ಆಗಸ್ಟ್ 21, 2011
ಸಮಸ್ಯೆ: ಅಬ್ಧಿಯೊಳು ಮುಳುಗಿದನು ಭಾಸ್ಕರನುರಿವಬಿಸಿಲಿನೊಳು
ಮಂಗಳವಾರ, ಆಗಸ್ಟ್ 16, 2011
ಕಪಿಯ ವಿವಾಹಗೊಂಡಳುಮೆ-- ಸಮಸ್ಯೆ
ಭಾಮಿನೀ ಷಟ್ಪದಿಯ ಕೊನೆಯಸಾಲಿನಲ್ಲಿ
ಕಪಿಯ ವರಿಸಿದಳುಮೆ ತಪಃಫಲಸಾರ್ಥಹರ್ಷದಲಿ
ಇದೇಸಮಸ್ಯೆ ಚಂಪಕಮಾಲಾವೃತ್ತದ ಕೊನೆಯಸಾಲಿನಲ್ಲಿ
ಕಪಿಯ ವಿವಾಹಗೊಂಡಳುಮೆ ಸಾರ್ಥಕ ಪೂತ ತಪಃಪ್ರಭಾವದಿನ್
ಬುಧವಾರ, ಆಗಸ್ಟ್ 10, 2011
ಸಮಸ್ಯಾಪೂರ್ಣ ೨
ಸೋಮವಾರ, ಆಗಸ್ಟ್ 8, 2011
ಒಗಟು: ಯಾರಿವರು ಹೇಳಿರೈ?
ಕುತ್ತಿಗೆಯ ತೆಗೆದವನ ಹೆಂಡತಿಯದಾರು? || ೧ ||
ಮತ್ಸರದೆ ತಲೆ ಕೊಯ್ದವನ ತಂಗಿ ಮಕ್ಕಳನು
ಕತ್ತಲೊಳು ಮಲಗಿರಲು ಶಿರವುರುಳಿಸಿದನಾರ್? || ೨ ||
ಚಿತ್ರಾಂಗದನ ನಲ್ಲೆಯರ ಗೆದ್ದ ಮಹಿಮನಾ
ಮಾತೃವನು ತಲೆಯಮೇಲಿರಿಸಿದವನಾರು? || ೩ ||
ಕ್ಷಾತ್ರತನವನುಬಿಟ್ಟು ತೀರ್ಥಯಾತ್ರೆಯಗೈದು
ಭ್ರಾತೃ ಸಂವೇದನೆಗೆ ಅಪವಾದನಾರು? || ೪ ||
ಬುಧವಾರ, ಜುಲೈ 27, 2011
ಸಮಸ್ಯಾಪೂರ್ಣ
ಸಮಸ್ಯಾಪೂರ್ಣದ ಆಟವಾಡೋಣವೇ ???
ಇಗೋ ನನ್ನ ಕಡೆಯಿ೦ದ ಮೊದಲ ಸಾಲು....
ಇದು ಭಾಮಿನಿ ಷಟ್ಪದಿಯ ಕೊನೆಯ ಸಾಲು....ಮೊದಲ ೫ ಸಾಲುಗಳನ್ನು ರಚಿಸಿ ನಿಮ್ಮ ಪರಿಹಾರ ತಿಳಿಸಿ....
ನಾನು ಕಡೆಯಪಕ್ಷ ೨ ಪರಿಹಾರಗಳನ್ನು ಆಗಷ್ಟ್ ೭ ರ೦ದು ಪೋಸ್ಟ್ ಮಾಡುವೆ....
ಸಮಸ್ಯೆ ಇ೦ತಿದೆ:
"ನೀರ ತಿನ್ನಲು ಮರಣವಪ್ಪಿದ ರಾಜ ಸಭೆಯೊಳಗೇ"
ಸೋಮವಾರ, ಜುಲೈ 25, 2011
ಹಂಪೆ - ೪ [ ಪತನ ]
ಮಾಯಿಲನ ಸೋಲಿಸಿದ ಕೃಷ್ಣನು
ರಾಯ ತರಿದರಿಸಿದನಲಾ ವೈರಿಯ ಮನೋಬಲವ ||
ರಾಯನಂತರದಲವನನುಜನು
ಅಚ್ಯುತನು ಬಲು ಲಂಪಟನು ಬಹು
ಸಾಯಬಡಿದನು ಕ್ರೂರತನದಿಂ ರಾಜ್ಯಧರ್ಮವನು || ೧ ||
ತನ್ನ ಜನರೊಡೆ ಭೇಧ ಕೆದಕುತ -
ಲಿನ್ನಿತರ ಹಿರಿ ಪಥದಿ ಪಥಿಸದೆ
ಸನ್ನಿವಾತದ ಜೊರದವೋಲವನರಿಯ ಕರೆತಂದ ||
ಕನ್ನವಿಟ್ಟನು ತನ್ನ ಬೊಕ್ಕಸ -
ಕಿನ್ನು ತಗೆದಿಪ್ಪತ್ತು ಲಕ್ಷದ
ಹೊನ್ನನಿಬ್ರಾಹಿಮಗೆ ತೆತ್ತನು ಕಪಟ ಸ್ವಾರ್ಥದಲಿ || ೨ ||
ಮುಂದೆಯಾಳಿದ ರಾಮರಾಜನು
ಹೊಂದಣಿಸಿ ವೈರಿಗಳ ನಡುವೆಯೆ
ಕುಂದುಗಳ ವೈರಿಗಳ ಭೇಧವೆ, ರಕ್ಷೆಯೆಂ ತಿಳಿದು ||
ಮಂದಮತಿಯಾ ಗರ್ವದಮಲಲಿ
ನೊಂದ ಮುಸಲರ ಮತದುಪೇಕ್ಷೆಯು
ತಂದಿತಾ ವೈರಿಗಳನೊಟ್ಟಿಗೆ ರಾಜ್ಯದಂತಕನಂ || ೩ ||
ತಾಳಿಕೋಟಿಯ ಯುದ್ಧದಲ್ಲಿಯೆ
ಕಾಲ ಮುಗಿಯಿತು ರಾಮರಾಜನ
ಶೂಲಕಿಟ್ಟರು ಕಡಿದ ತಲೆಯನು ಮುಸಲ ಶತ್ರುಗಳು ||
ಬಾಳ ಭಯದಲಿ ಚೆದುರಿವೋಡಿದ
ಬೀಳುತೇಳುತ ಲಕ್ಷಮೀರಿದ
ಸೋಲಿನಲಿ ಮೃತ್ಯುವಿನ ತೆಕ್ಕೆಗೆ ಹಿಂದು ಸೈನಿಕರು || ೪ ||
ಬಿದ್ದ ಗಜವನು ನಾಯಿನರಿಗಳು
ಗದ್ದರಿಸಿ ಪೌರುಷದಿ ಕಿತ್ತುತ
ಜಿದ್ದ ತೀರಿಸೆ ಮುಕ್ಕುವಂತೆಯೆ ಪಂಪೆಯಾಯ್ತಕಟ ||
ಕದ್ದು ಲೂಟಿಯ ಮಾಡಿ ನಗರವ
ವೊದ್ದು ಕೆಡವುತ ಗುಡಿಗಳೆಲ್ಲವ
ನೆದ್ದ ಮತದಾಹಮ್ಮಿನಲಿ ಕಡಿದೋಡಿಸುತ ಜನರ || ೫ ||
ಜಗದಲತಿ ಶ್ರೀಮಂತ ನಗರವು
ಬಿಗಿದ ವಿಧಿಯತಿ ಕ್ರೂರ ಪೆಟ್ಟಿಗೆ
ಸೊಗದ ಕಥೆಗಳ, ಮುಗಿದ ಸ್ಥಾನದ ಬರಿಯ ಹೆಣವಾಯ್ತು ||
ತೆಗೆದ ವರ್ಷಗಳೊಂದೆರಡರಲಿ
ಮಿಗಿಲಿನೈಶ್ವರ್ಯಗಳ ಸರ್ಗವು
ಖಗ ಮೃಗಾದಿಗಳೋಡಿಯಾಡುವ ಬರಿಯ ಕಾಡಾಯ್ತು || ೬ ||
- ರಾಮಚಂದ್ರ
ಭಾನುವಾರ, ಜುಲೈ 24, 2011
ಹಂಪೆ - ೩
ರೆಕ್ಕೆ ಬಂದುದು ಹಿಂದು ಧರ್ಮಕೆ
ಹಕ್ಕನಾಗಿರೆ ಮೊದಲ ರಾಜನು
ಬುಕ್ಕ ಕಂಪರು ಬೆನ್ನಿನನುಜರು ಸೊಂಟಕಟ್ಟಿರಲು ||
ಉಕ್ಕಿಸುತಲುತ್ಸಾಹವಿವರಲಿ
ರೊಕ್ಕವನು ಹೊಂದಿಸುತ ರಾಜ್ಯದ
ಟೆಕ್ಕೆಯನು ಹಾರಿಸಲು ಮಾಧವ ಸಾಯನರ ದೀಕ್ಷೆ || ೧ ||
ಪರುಠವಣೆಯ ಭರಾಟೆ ಸಾಗುತೆ
ಹರಡಿದವು ರಾಜ್ಯಾಂಗ ಗಡಿಗಳ -
ವರಿಗಳಾ ಮಟ್ಟಣಿಸಿ ಜಯದಿಂ ರಾಜ್ಯ ಬೆಳೆದೊರೆದು ||
ವರುಷವೆರಡೂವರೆಶತಂಗಳ
ವರೆಗು ಮೆರುಗಿದ ವಿಜಯನಗರವ
ಸಿರಿಯ ಸಂಗಮ, ಸಾಳುವರು, ತುಳುರಾಯರಾಳಿದರು || ೨ ||
ವಿಜಯನಗರದ ರಾಜಕುಲ ಸಾ -
ಮಜನು ಕೃಷ್ಣs ದೇವರಾಯನು
ಸುಜನ ಸುಚರಿತ್ರರನು ಮೆರೆಸಿದ ಸಕಲ ಸದ್ಗುಣನು ||
ಅಜರವಾಗಿಸಿತವನ ಹೆಸರನು
ಸುಜಲ ಯೋಜನೆ ಕಾರ್ಯಚರಣೆ ಖ -
ನಿಜದಲೊರೆದಾ ಕಲೆಗಳೂ ಸಾಹಿತ್ಯ ಸಂಪದವು || ೩ ||
ಕಾಲ ಕ್ರಮದಲಿ ರಾಜ್ಯ ಮದದಿಂ
ಕೇಳರಿಯದಾ ಭೋಗ ಸುಖದಿಂ -
ದಾಳುವಾ ಶೌರ್ಯವನು ಮತ್ತೊಗ್ಗಟ್ಟಣೆಯ ಮರೆತು ||
ಕಾಲು ತೊಡರುವ ಮುಸಲ ರಾಜರ
ಹೇಳಹೆಸರಿಲ್ಲದವೊಲಡಗದೆ
ಶೂಲಕಿಟ್ಟರು ರಾಜ್ಯಸಿರಿಯನು ಮುಗಿಸುತಂಕವನು || ೪ ||
- ರಾಮಚಂದ್ರ
ಶನಿವಾರ, ಜುಲೈ 23, 2011
क्षुत्क्षामोपि जराकृशोपि शिथिलप्रायोपि... ಕನ್ನಡದಲ್ಲಿ
ಕ್ಷಾಮವತಿಯದೊಡೇನ್? ರೋಗದಿಂ ಕೃಶನಾಗೆ
ಶಿಥಿಲಪ್ರಾಯವು ಬಡಿದು ಹತ್ತಾರು ಕಷ್ಟಗಳ -
ನಿಂದ ಬುಧ್ಧಿಯು ಸಮತೆ ಕಳೆಚಿರಲು ದೇಹದಿಂ ಪ್ರಾಣಜಾರುತಲಿರ್ದೊಡೇನ್?
ಮದಗಜಗಳಧಿಪನಲಿ ನೆತ್ತಿ ಸೀಳುತ ಕವಳ
ಸವೆಯ ಬಯಸುವವೊಂದೆ ಮನದಾಸೆ ಹೊಂದಿರ್ಪ
ಮಹನೀಯಮಾನಿಗಳ ಮೊದಲಿಗನು ಕೆಸರಿಯು ಜೀರ್ಣಿಪನೆ ಹುಲ್ಲ ತಿಂದು?
ಸೋಮವಾರ, ಜುಲೈ 18, 2011
ಹುಣ್ಣಿಮೆ ಚಂದ್ರನ ಬಗ್ಗೆ
ಶನಿವಾರ, ಜುಲೈ 16, 2011
Brahmachari
¨sÁ«Ä¤0iÀÄ £Á£ÉƯÉè §æºÀäZÀ0iÀÄðªÀzÉ£ÀUÉ
ªÁzsÀðPÀªÀÅ zÀÆgÀ«zÉ £À£ÀUÉÃvÀPÁ aAvÉ
ºÀÆ«UÀµÉÖà EgÀ° µÀlà¢0iÀÄ ºÀA§®ªÀÅ
¸ÉÃgÀzÉA¢UÀÄ PÀAzÀ PÀªÀ¤¸À®Ä ¨sÁªÀUÀ¼À
ªÀÈvÀÛgÀUÀ¼É¸ÁAUÀvÀåUÀ¼É®è CªÀzsÁ¤UÀ½VgÀ°
GUÁ¨sÉÆÃUÀªÀZÀ£ÀUÀ¼ÉƼÀUÀ©üªÀåQÛUÉÆArgÀĪÀAvÉ
¥ÀAZÀªÀiÁvÁæUÀw0iÀÄ bÀAzÉƧAzsÀªÉ ¸ÁPÀÄ