ಬುಧವಾರ, ಮಾರ್ಚ್ 30, 2011

ಉಪನಯನದ ಶುಭ ಹಾರೈಕೆ


ವಿದ್ಯೆಯಾರ್ಜನೆ ಬ್ರಹ್ಮಚಾರಣೆ
ಹೃದ್ಯವಾಗಿಸುವಾನುಮೋದನೆ
ಸದ್ಯ ತಂದಿಹ ಕಂದನೋಪನಯನದ ಶುಭ ಕಾರ್ಯ ||
ಖಾದ್ಯ ಚೋದ್ಯದ ಮಿತದ ಹಿತದಿಂ
ದಧ್ಯಯನ ದಿನನಿತ್ಯ ಸಂಧ್ಯಾs
[ಅಧ್ಯವಸನವು ಮಿಡಿಯುತಲಿ ನಿನ ದೇಹ ಮನಗಳಲಿ]
ರಾಧ್ಯ ಸವಿತಾ ಪಿತೃಋಷಿಂಗಳ ವಂದನೆಯ ಪರಿಯು || ೧ ||

ನುಡಿಯು ಸತ್ಯದ ಮೇಲೆ ನಿಲ್ಲಲಿ
ಕೊಡದೆಯವಕಾಶವನಧರ್ಮಕೆ
ಕಡು ವಿವೇಕವು ಹೊಳೆಯುತಲಿ ಧೀ ಶಕ್ತಿ ಬೆಳೆಮೆಯಲಿ ||
ಬಿಡದೆ ಮನೆತನ ಸಂಪ್ರದಾಯವ
ಕಡಿಯುತಲಿ ಕಡಿದಾದ ಕಷ್ಟವ
ಮಡಗು ನೀ ಹಿರಿದಾದ ಹೆಸರನು ಮನೆಗೆ ಗುರುಕುಲಗೆ || ೨ ||

ಕಾಯು ನೀ ನಿನ ಧರ್ಮ ಕರ್ಮವ
ಬಾಯಿ ಮನಸಿನ ವಿಮಲ ಸೌಷ್ಠವ
ಪಾಯಸದ ತರ ದಕ್ಕುವುದು ಮಿಗೆ ಸುಖದ ಸಂಪದವು ||
ತಾಯಿ ತಂದೆಯು ಮತ್ತಥಿತಿಗಳ
ಕಾಯೊ ಗುರುವೂ ದೇವರೆಂ ತಿಳಿ
ಮಾಯೆಯಾ ಜಗ ತಾನೆ ಸಲ್ವದು ನಿನಗೆ ಹಿಡಿತದಲಿ || ೩ ||

ಬೆರೆಸಿ ಪಾಠದ ಜೊತೆಗೆಯಾಟಗ
ಳರಸಿ ಕಲೆಗಳ ಸೂಕ್ಷ್ಮ ಪದರವ
ಗುರುಗಳುತ್ತಮ ಪ್ರಜೆಯು ನೀನಾಗೆನ್ನ ಕಣ್ಮಣಿಯೇ ||
ಕರುಣದಿಂ ನೀ ಕಾಣು ದೀನರ
ವರುಷ ಕಳೆದಿಹ ಹಳೆಯ ಮನುಜರ
ಯೆರೆಯುತಲಿ ತಂಪೆಲರ ಜನತೆಗೆ ಸುಗುಣ ಸನ್ಮತಿಯೇ || ೪ ||

ಪುರುಷ ಶ್ರೇಷ್ಠರ ವಂಶದಲ್ಲಿನ
ಹಿರಿಯ ಪುಣ್ಯದ ಶಕ್ತಿ ಬೆನ್ನಿನ
ಲಿರಲು ಹರಿನೀ ಸ್ನಾತಕತೆಯೆಡೆ ಹಗುರ ಮನಸಿನಲಿ ||
ಹರಕೆ ಶಕ್ತಿಯಪಾರ ಬಲದಿಂ
ದುರಿಸು ನಿನ್ನಯ ಜ್ಞಾನ ದೀವಿಗೆ
ಸರಸ ಸಾರಸ್ವತದ ಸಮದಿಂದುತ್ತಮೋತ್ತಮನು || ೫ ||

- ರಾಮಚಂದ್ರ

ಮಂಗಳವಾರ, ಮಾರ್ಚ್ 29, 2011

ಒಂದು ವಿರಕ್ತ ಸುನೀತ

ಅಲೆದಲೆದು ಸುಸ್ತಾಗಿ ಮನುಜ ಕಟ್ಟಿದ ಗೂಡು
ಗಳು ಸೇರಿ ಒಟ್ಟಂದದಲಿ ಪೇಟೆಯಾಯ್ತಲ್ಲ!
ಕಲೆತು ಮಲೆತರು ನರರು ನೆಲೆಯೂರಬೇಕಲ್ಲ,
ಬೆಲೆ ಕಟ್ಟಿದರು ಮಲಗಲಡಿಯ ಲೆಕ್ಕದಲಿ.


ಪ್ಲಾಟಿನಂ ಚಿನ್ನ ನಗ ಕಾರು ಬಂಗಲೆ ಬೇಕು
ಸ್ಲೇಟದಿನ್ನೆಲ್ಲಿಯದು ಲ್ಯಾಪ್ ಟಾಪು ಹಣೆಬರವು
ಪ್ಲೇಟು ಬಂದಿತು ಬಾಳೆಮರಗಳೋ ಬಾಗಿದವು
ಕಾಟು ಮೇಲ್ ಕುರ್ಲಾನೆ ಪ್ರಸ್ಥವಾಗಲು ಬೇಕು.


ನಾಗರೀಕರೊ ನಾಗರಿಕರೊ, ಪಾಣಿನಿಯೆಲ್ಲಿ?
ನಾಗಮಂಡಲಪಾತ್ರಿ ಕುಣಿಯುವುದ ಮರೆತಂತೆ
ಭೋಗ-ರೋಗದ ಯೋಗ ಕಡೆಗಂತೆ ಮಡಿಕಂತೆ
ಕಾಗುಣಿತ ಕ್ಯಾ ಕುಣಿತ, ಕ್ಯಾಲ್ಕುಲೇತರದೆಲ್ಲಿ?


ಬರಿಕಾಲು ಬಿಳಿಶಾಲು ಹೊದ್ದು ಹೊರಡುವ ಬಾರ
ಪೇಟೆತೀಟೆಯು ಸಾಕು, ಅರಿವ ಮಣ್ಣಿನ ಸಾರ.

ಸೋಮವಾರ, ಮಾರ್ಚ್ 28, 2011

kanda padya

ಬಂದವನಾ ರೇ ಮನದಲಿ
ಚಂದದಿ ನುಡಿಸುತ ಸುಮಧುರ ವೇಣು ನಿನಾದವ
ನಂದ ಕುಮಾರನೆ ಮನದಾ
ನಂದವ ನೀಡುತ ಮರೆಯದೆ ಪೊರೆಯಲು ಬಂದವ

-venkataraghavan
an attempt to write an kanda padya : a gopikas expression

ಭಾನುವಾರ, ಮಾರ್ಚ್ 27, 2011

ಭಾಮಿನಿಯ ಆಕರ್ಷಣೆ

ಮೊದಲು ಬರೆದ ೪ ಮತ್ರಾಗಣದ ಪದ್ಯಗಳು (ಬಾಳೆಯ ತೋಟದ ಪಕ್ಕದ ಕಾಡಲಿ .... ತರಹದ್ದು) ::


ಭಾಮಿನಿ ಮೋಹದ ಸುಧಾಲಹರಿಯಲಿ ಮೀಯುತ ಬೇರೆಲ್ಲವ ಮರೆತೆ ||
ಕಾಮಿನಿ ಸುಖದಲಿ ಮುಳುಗೇಳುತನಾ ಜೀವನದಾಕರ್ಷಣೆ ಅರಿತೆ || ೧ ||

ಕೋಮಲ ರಾಗದಿ ಭೋಗ ಕುಸುಮಗಳು  ಅಕ್ಕರೆಯಲಿ ಕರೆಯುತಲಿಹವು ||
ಸೋಮದ ಸೊಗಸನು ಮಂದಾನಿಲ ತರೆ ಕಂದವನೇ ಲಲಿತದಿ ತಹವು || ೨ ||

ಭಾಮಿನಿ ಸೆರೆಯಿಂ ಬಿಡುಗಡೆ ಪಡೆಯದೆ ಗದಗಿನ ಕವಿ ಕೊನೆಯುಸಿರೆಳೆದ ||
ಆಮಹನೀಯನಿತರ ಚಂಚಲೆಯರ ಸೈರಿಸದೆಯೆ ಜನುಮವ ಕಳೆದ || ೩ ||

ರಾಮನ ಒಂದೇ ಪತ್ನೀ ವ್ರತವೋ ಕಾಮನ ಬಹುಮಯ ಚಪಲತೆಯೋ ||
ಸಾಮಸಮಾಸಮ ಭಾವಗಳೆಲ್ಲವ ಹೊರಹೊಮ್ಮುವ ಮೇಣ್ ಚದುರತೆಯೋ || ೪ ||

ಇದೇ ಭಾವವನ್ನು ಭಾಮಿನಿಯಲ್ಲಿ ನಂತರ ಬರೆದದ್ದು ::


ಮರೆತೆ ಮೀಯುತ ಭಾಮಿನಿಯ ಸುಧೆ
ಸರಸಿಗಳಲುಳಿದೆಲ್ಲ ಛಂದಗ
ಳರಿತೆ ರಸಗಳ ಭಾವ ಸೆಳೆತವ ಮುಳುಗುತೇಳುತಲಿ ||
ತೆರೆದ ಕುಸುಮದ ಭೋಗರಾಗಗ
ಳೆರೆದ ಸೋಮದ ಸೊಗಸು ಲಲಿತದ
[ಕರೆದ ಕಂದಾ ಮಂದಾನಿಲದಲ್ಲೆಲ್ಲ ನಿರ್ಲಕ್ಷ್ಯ]
ಝರಿಯ ಮಂದಾನಿಲಕೆ ಕಂದಕೆ ದಿವ್ಯನಿರ್ಲಕ್ಷ್ಯ || ೧ ||

ಬಾಮಿನಿಯ ಸೆರೆಯಲ್ಲಿ ಸಿಲುಕಿರೆ
ಕಾಮದಿಂಬಿಡುಗಡೆಯ ಪಡೆಯೆನೆ
[ಜನ್ಮ ಸಾಲದೆ ಹೋಯಿತಾ ಗದಗಿನ ಮಹಾಶಯಗೆ]
ನೇಮಜನ್ಮಾದ್ಯಂತ ಗದಗಿನ ಕವಿಮಹಾಶಯಗೆ ||
ಸಾಮಭಾವವ ಚಿಮ್ಮೊ ಚದುರತೆ
ಕಾಮ ಚಪಲತೆಯಂತೆ ವಿವಿಧತೆ
ರಾಮನವ್ರತದೇಕತೆಯೊ ಮೇಣ್ ರಾಗ ಪರಿಕರವೋ || ೨ ||

- ರಾಮಚಂದ್ರ

ಶನಿವಾರ, ಮಾರ್ಚ್ 26, 2011

ಒಂದು ಬೆಳಗಿನ ಮುಕ್ತಕ

ನಭದ ಉದ್ದಗಲಕ್ಕು ಕಿತ್ತಳೆಯ ತಿಳಿಗೆಂಪು
ಸೆರಗ ಬೀಸುತ ಬೆಕ್ಕ ನಡೆಯಲ್ಲಿ ಉಷೆಯು,
ಬಳುಕುತ್ತಲಾಗಸವ ದಿವೆಯ ಮಡಿಲಿಗೆ ಹಾಕ-
-ಲೆಳಸುತ್ತ ಬರುತಿಹಳು, ಮೂಡಣದ ಹೋಳಿ!

ಗುರುವಾರ, ಮಾರ್ಚ್ 24, 2011

ಶಿಶುಗೀತೆ

Twinkle Twinkle Little Star....
ಕನ್ನಡದಲ್ಲಿ ನಡಸಿದ ಒಂದು ಪ್ರಯತ್ನ


ಚಿನಿಮಿನಿ ಚಿನಿಮಿನಿ ನಕ್ಷತ್ರ
ಏರಿದೆ ಏಕೆ ಅಷ್ಟೆತ್ರ!

ಚಂದಿರನ ಎಲ್ಲಿ ಕಳಿಸಿರುವೆ
ನಿನ್ನನೇ ನೋಡುತ ಮೈಮರೆವೆ!

ಅರಳಿತು ಕಂಗಳು ನಿನ್ನ ನೋಡಿ
ಎಣಿಸುತ ದಣಿದೆ ಓಡಾಡಿ!

ಮಣಿಯೇ ನೀನು ಅಮ್ಮನ ಸರಕೆ
ಬಾರೆಲೆ ತಾರೆಯೆ ಹತ್ತಿರಕೆ!

ಉಣಿಸುವಳಮ್ಮ ನಿನ್ನ ತೋರಿ
ಕುಣಿಯುತ ಮೊಮ್ಮುವೆ ನಾ ಹಾರಿ!

- ರಜನೀಶ

ಬುಧವಾರ, ಮಾರ್ಚ್ 23, 2011

ಮಾಧವ....

ಮಾಧವಾ ನೀ ಮಮತೆಯಾ ಮಡು

ರಾಧೆಯಾ ರಾಗನಿವ ನರಕನ

ಭಾಧೆಯಾ ಭಂಧನವ ಬಿಡಿಸಿದ ಅಂಗನಾಲೋಲಾ

ಆಧರದ ಸೋದರನೆ ನೆಚ್ಚಿಗೆ

ಸಾಧಿಸಲೊಲವ ವಿಜಯನರಸಿಗೆ

ವೇಧೆಯಲಿ ಕೈ ಪಿಡಿದೆ ನೀ ವೀರರ ಸತೀಮಣಿಯಾ

ಸೋಮವಾರ, ಮಾರ್ಚ್ 21, 2011

ನೆನಪಿನಾs ಹಾಯಿ-ದೋಣಿಯಾನ
ಹಗುರಾಗಿಸಲೆಮ್ಮಯ ಮನ-ವನವನನುದಿನ

ಎಂದೋ ಉಂಡ ಹನಿಜೇನ ಸವಿ,
ಜೇನಹೊಳೆಯಲಿ ಮಿಂದರೂ
ಸೊಗಯಿಸದು ನಮಗಿಂದು
ಏಕಾಯಿತು ಹೀಗೆ? ಏನಾಯಿತು ನಮಗೆ?
ಧರೆಯ ವೇಗದಲಿ ಇಂತಿಷ್ಟು ಬದಲಿಲ್ಲ
ಬ್ರಹ್ಮಾಂಡ ತಿರುತಿರುಗಿದರೂ ವೇಗದರಿವಿಲ್ಲ
ಬಂಡಿಯೊಳಿದ್ದು ಅನಂತದಲ್ಲಿ ದಿಟ್ಟಿಸುವವೋಲ್-
ನೋಟವಿರಲೆಮಗೆ ಆಗೆಲ್ಲವೂ ಸ್ತಬ್ದ, ನಿಶ್ಶಬ್ದ;
ಮನ-ವನವನಾವರಿಸುವುದು ಮೌನ,
ಆಗಲೇ ಶಾಂತಿ, ಶಾಂತಿ, ಶಾಂತಿ

ಶ್ರೀಶನ-ಸೀಸ

ಸೀಸ ಪದ್ಯ.....೬ ವಿಷ್ಣುಗಣ(ಅಥವಾ ೫ ಮಾತ್ರೆಯ ೬ ಗಣಗಳು) + ೨ ಬ್ರಹ್ಮಗಣ ( ಅಥವಾ ೩ ಮಾತ್ರೆ ೨ ಗಣಗಳು) ಗಳ ೪ ಸಾಲುಗಳು...
೫*೬ + ೩*೨
ಕೊನೆಗೆ ಸೀಸದ ಜೊತೆಯಾಗಿ ಬರುವ ತೇಟಗೀತೆ( ೩ * ೧ + ೫*೨ + ೩* ೨)

ಮಾತ್ರೆಗಳಿಗಕ್ಷರಗಳನಿಡುವಿಕ್ಕಟ್ಟಲೆ ಜಗದಗಲವ ನಿರ್ಮಿಸಿ ನಗುತಲೆ ನಡೆದ
ಪದಮಾತ್ರ ದಲೆ ಕಾವ್ಯಸಾಸಿರವ ಸೃಜಿಪ ಕವಿಯ೦ತ್ರತಿರುಪುಗಳ್ ಬಿಗಿವ೦ಥ ಯ೦ತ್ರಿ |
ಛ೦ದದಿ೦ ಚ೦ದವಾಗಿಹಕಾವ್ಯದಿ೦ ಬದಲಿಸಿಹ ಜೀವಗತಿಯ ಹುರುಪಿನಿ೦ ಕಾವ್ಯೋ
ದ್ಯೋಗಕ್ಕೆಳೆಸಿ ದಾರಿಯಲಿ ಹೆಜ್ಜೆ ಗುರುತೊ೦ದಕ೦ಡು ನಮಿಸುತಿರಿಸಿಹೆ ಹೆಜ್ಜೆಯೊ೦ದಾ ||

ಸ್ವೀಕರಿಸಿ ಶ್ರೀಶನೀ ಸೀಸವ೦ ಹರಸಿ ನೀವ್
ಕೈಯೆಡವದ೦ತೆ ಮನದಿ೦ಗಿತವ೦ ರಚಿಸಲ್ ||

ಭಾನುವಾರ, ಮಾರ್ಚ್ 20, 2011

ಮಹರ್ಷಿ ವಾಲ್ಮೀಕಿಯ ಮೊದಲ ಶ್ಲೋಕ ಬರೆದ ಸಂಧರ್ಭವ ವಸ್ತುವಿಟ್ಟು ಬರೆದಿದ್ದೇನೆ:

ನೀರ ತಿಳಿ ತೊರೆಗಳ ನಿನಾದದ-
ಪಾರ ಹಸಿರಿನ ಶಾಲಗಳ ವಿ-
ಸ್ತಾರ ವನಗಳು ಚಿತ್ರಕೂಟದ ಸೊಭಗ ಮೆರೆಸಿಹವು ||
ಧೀರ ಮುನಿಗಳ ಶಾಂತ ತಪಗಂ-
ಭೀರ ಯಜ್ಞ್ಯದ ಕಾರ್ಯವಲ್ಲದೆ
ದೂರ ದೇಶದ ವಲಸೆ ಪಕ್ಷಿಗಳನ್ನು ಸೆಳೆಯುತಲಿ || ೧ ||

ದ್ರುಮಗಳಡಿಯಲೆ ತಮಸೆ ತಟದಾ-
ಶ್ರಮದೆ ವಾಲ್ಮೀಕಿಮುನಿ ಜಪತಪ
ಕ್ರಮದೆ ನಡೆಸುತ ಹಲವು ವರ್ಷಗಳಲ್ಲೆ ಕಳೆದಿಹನು ||
ಶ್ರಮದೆ ಯೋಜನೆಗಳನು ದಾಟುತ
ಕ್ರಮದೆ ಸ್ಥಳ ಪರಕಿಸಲು ಇದೆವಿ-
ಶ್ರಮಕೆ ಯೋಗ್ಯವನೆಂದು ಕ್ರೌಂಚಗಳೆರಡರಭಿಮತವು || ೨ ||

ಶಾಲದತಿ ಎತ್ತರದ ಮರದಲಿ
ಮೇಲೆ ಬಲಯುತ ಕೊಂಬೆಯಾರಿಸಿ
ನೀಲ ಕ್ರೌಂಚಗಳೊಂದುಗೂಡನು ಮುದದೆ ಕಟ್ಟಿದವು ||
ನೀಳ ಕತ್ತುಗಳೊಂದರೊಂದಿಗೆ
ವಾಲಿಸುತ ತೊರ್ಪಡಿಸೆ ಪ್ರೀತಿಯ
ಲೀಲೆಯನುದಿನ ನೋಡುತಿದ್ದನು ಮುನಿಯು ಸಂಭ್ರಮದಿ || ೩ ||

ಹಾರುತಿರೆ ರೆಕ್ಕೆಗಳ ತುದಿಗಳು
ನೀರ ಸೋಕಿಸೆ ಸಣ್ಣ ಅಲೆಗಳ
ನೇರ ರೇಖೆಗಳೆರಡುಕಡೆಯಲು ಚಂದ ಕಾಣುವುದು ||
ಕೀರಲಿನ ಭಾಷೆಯದದಾದರು
ಸಾರವದ್ಭಾವನೆಯ ಕೇಕೆಗೆ
ಸೂರೆಗೊಂಡನು ಮುನಿಯು ಪ್ರಕೃತಿಯ ರೀತಿಗಳ ಕಂಡು || ೪ ||

ಶಾಲಮರದೆಡೆ ಮುನಿಯು ನೋಡಲು
ಮಾಲೆಯೆನೆ ಕೊರಳುಗಳ ಹೆಣೆದಿಹ
ಕಾಲವನೆ ಮರೆತಿರುವ ಮಿಥುನದ ಕ್ರೌಂಚಗಳ ಕಂಡ ||
ಶೂಲದಂತಹ ಬಾಣವೊಂದನು
ವ್ಯಾಲನೊಬ್ಬನು ಬಳೆಸೆ ಕತ್ತಿನ
ಮೋಲ ಸೀಳಿತು ಗಂಡು ಪಕ್ಷಿಯ ಪ್ರಾಣ ಹಾರಿಸುತ || ೫ ||

ಹೆಣ್ಣು ಗಾಬರಿಯಿಂದ ಹಾರುತ
ಮಣ್ಣಿನಾಸರೆ ಪಡೆದು ರಕ್ತದ
ಬಣ್ಣ ಹರೆಡಿಹ ತನ್ನ ನಲ್ಲನ ದೇಹ ಸೇರುತಲಿ ||
ತಣ್ಣಗಿನ ಕೊರಳನ್ನು ತೀಡುತ
ಸಣ್ಣಗಿನ ಅಳಲನ್ನು ಹೊರಡಿಸೆ
ಕಣ್ಣು ಮಂಜಾಗುತಲಿ ಮುನಿವರ "ಒಡನೆ ಶಪಿಸಿದನು" || ೬ ||

~~~~~~~~~~~~

ನನ್ನ ಅನಿಸಿಕೆ

ವರುಷವಾರು ಕಳೆದಿಪ್ಪ ಸಮಯದಿ
ಹರುಷವಪ್ಪುದು ನಮ್ಮಬಳಗಕೆ
ಹುರುಪಿನಿಂದಲಿ ಕಾಲವೋಡಲು ಗುರುವ ಸಂಗದಲಿ

ಪುರದಲೆಲ್ಲರೂ ನಿಧಿಯ ಹುಡುಕುತ
ಭರದಿ ದುಡಿಯಲು ನೂರು ಮಾರ್ಗದಿ
ಹರನು ನೀಡಿಹನೆಮಗೆ ನಿಧಿಯನು ಗುರುವ ರೂಪದಲಿ

- ಕಾಂಚನಾ

ಶನಿವಾರ, ಮಾರ್ಚ್ 19, 2011

ಭಾಮಿನಿಯ ಮಳೆ

ಉತ್ತರಕೆ ಪ್ರತ್ಯುತ್ತರಗಳಿರೆ
ಮತ್ತೆ ಪದ್ಯಗಳೋಡಿ ಬರುತಿರ -
ಲೆತ್ತಿ ನಲಿದುದು ಪ್ರತಿಭೆ ಕಾವ್ಯ ಕುತೂಹಲಿಗರೆದೆಯೊಳ್  ||
ಸುತ್ತ ಭಾಮಿನಿ ಷಟ್ಪದಿಗಳಲಿ
ಮುತ್ತಿ ಬರುತಿಹುದೀಸುಹಾಸವು
ತುತ್ತ ಮರೆಸುತಲಿದ್ದುದಲ್ಲದೆ ನಿದ್ರೆಯನು ಕಾಡಿ || ||

ಅನಾಸಕ್ತರಿಗೂ 'ವಿಶ್ವಕಪ್ ಕ್ರಿಕೆಟ್'ನ ಕೊಡುಗೆ (ಭಾಮಿನಿ)

ಆಟವಿದ ಬಹು ರೋಚಕದೆ ಜನ
ಗೂಟ ಹೊಡೆಯುತ ದೂರದರ್ಶನ
ನೋಟ ನೋಡಲು ಎಲ್ಲ ಸಮಯವ ಮೀಸಲಿಡುತಿಹರು!
ಸ್ಫೋಟದಲೆ ಬೆಳೆದಿರುವ ದೇಶದ
ಕಾಟದತಿ ಬಂಡಿಗಳ ಪಥಗಳು
ಮಾಟವೆನೆ ಸುಲಭದಲಿ ಕೆಲಸವ ಮಾಡೆ ತೆರೆದಿಹವು!!!

ನಮ್ಮ ಗಣೇಶರಿಗೆ - ಭಾಮಿನಿಯಲ್ಲಿ ಒಂದು ಪ್ರಯತ್ನ

ಕನ್ನಡ powered by Lipikaar.com
ನಮ್ಮ ಗಣೇಶರು

ಮಗುವಿನ ಮನದ ಗಣೇಶರಿವರು
ನಗುವಿನೊಂದಿಗೆ ಪಾಠಹೇಳುವ
ಮೊಗದಿತೇಜದ ನಿಜದಿ ಸಕಲರಸೆಳೆವ ವಾಗ್ಮಿಯು
( ನಿಜದ - ಸತ್ಯವನ್ನೇ ತಿಳಿಸಿ, ನಿಜದಿ- ನಿಜವಾಗಿಯೂ)
ಚಿಗುರುಗಂಗಳ ಯುವಕಸಮೂಹ
ಮೊಗೆದರುಕ್ಕುತಿಹ ಜ್ಞಾನ ಯಾಚ-
-ನೆಗೆ ನೆರೆಯಲಿಂದದೇನಾಂದವು ರಸಜೀವಿಗೆ

ಹೊಲಿಸಲಾರಿಲ್ಲ

ಹೊಳೆಹೊಳೆಯು ತಿರುವ ಕಣ್ಚಿಪ್ಪಲಿಮೆರೆವ ಮುತ್ತಿನ ಕಣ್ಮಣಿ

ಕಳೆ ಕಳೆದುಕೊಂಡಳು ನಿನ ಕಂಡು ಕರುಬಿದಳು ನಿಶಾರಮಣಿ

ಹೊಳೆದರೂ ಹೊಳೆದಾಳು ಕರಿಯ ಮುಗಿಲಲ್ಲಿ ತಾರಾತರುಣಿ

ಬಲುಬಿಳಿಯು ಕಣ್ಹರುವು ಆದರೂ ಗೆದ್ದೆ ನೀನು ಶ್ಯಾಮಲೆ

ಬರಿದೆ ಭಾರವಾಯಿತು ಬಣ್ಣಗಳು ಮಾರನಾ ಬಿಲ್ಲಿಗೇ

ಸರಸಿ ನಿನ್ನ ಉಬ್ಬಿದಾ ಕಣ್ ಹುಬ್ಬಿನ ಕಾರ್ಧನುವ ಕಂಡು

ಸುರ ತೇನಿನಲಿ ಮಿಂದಿದೆ ಕೆಂದಾವರೆಸಳುಗಳ ಕೆಂದುಟಿ

ಅರುಣನಾ ಸಂಜೆಗೆಂಪು ಕಪ್ಪಾಗಿ ಕರಗಿತು ಅದಕಂಡು.

ಶುಕ್ರವಾರ, ಮಾರ್ಚ್ 18, 2011

ಜನ್ಮದ ಬಲ

ಇದು ಸೋಮ ಪದ್ಯ ಮೂಲಕ ಕೇಳಿದ ಪ್ರಶ್ನೆಗೆ ಒಂದು ಉತ್ತರ ::

ತಂದೆ ತಾತರು ಪಿತೃಗಳೆಲ್ಲರು 
ತಂದ ಪೂರ್ವಾಪರದ ಗತಿಗಳ
ಮುಂದುವರಿಸಿದ ತಳಿಯ ಪುಣ್ಯದ ಜನುಮವೆಮ್ಮಿರವು ||
ಹಿಂದೆ ಕೇಡಿಗರೆದುರು ಹೆದರಿರೆ
ಮುಂದೆ ಕುರುಗಳ ಕ್ಷೇತ್ರ ಯುದ್ಧದಿ
ತಂದೆ ಸಹಿತದಿ ಹೋರಿ ಮಡಿದವ ಹೇಡಿಯೆಂತಹನು?

[ಇನ್ನೂ ಮುಂದುವರಿಯಲೂ ಬಹುದು :-)]

- ರಾಮಚಂದ್ರ

ಸೋಮನಾಥ ದೇವಾಲಯದ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ಒಂದು ಪದ್ಯ

ದಾಳಿ ಕೋರರ ಕತ್ತಿ ಹೊಡೆತಕೆ 
ಸಿಲುಕಿ ತತ್ತರಿಸಿದ್ದ  ನಿನ್ನಯ 
ಅಳಲನಾಲಿಸಿ ಆಸೆಯೊಂದನು ಕಂಡರು ಪಟೇಲರು |
ಅಲ್ಲಿ ಶಿವ ದೇಗುಲವ ಕಟ್ಟಿಸಿ
ಬೆಳೆಸಿ ರಾಷ್ಟ್ರ ಪ್ರೇಮ ಭಕುತಿಯ  
ಅಳಸಿದರು ಪಾತಕವನೆಸಗಿದ ವೈರಿ ನೆನಪುಗಳಾ ||

Corrections/suggestions welcome

ಗುರುವಾರ, ಮಾರ್ಚ್ 17, 2011

ಭಾಮಿನಿಯಲ್ಲಿ ೩ ಪದ್ಯಗಳು

ಬರಿಯ ಜನ್ಮದ ಬಲ ಸಾಲದು:
-----------------------

ಬರಿಯ ಜನ್ಮದ ಬಲದಲೇನಿದೆ
ನರನನುತ್ತಮನೆಂದು ಬಗೆಯುವ
ಸ್ಥಿರದ ಶೌರ್ಯ ಕುಶಾಗ್ರಮತಿಯ ವಿಲಾಸ ಸೊಗಸುಗಳು?
ಪುರದ ರಾಜನ ಕುವರನಾದೊಡೆ
ತುರುಗಳನು ಹಿಡಿದೊಯ್ದ ಕೇಡಿಗ
ಕುರುಜನರ ಪವ್ರುಷವನಡಗಿಸೆ ಉತ್ತರೋತ್ತರನೆ? ||||
[ಕುರುಜನರ ಪವ್ರುಷವನಳಿಸದ ಉತ್ತರೋತ್ತರನೆ? ]

ಬಾಲವಯದಲಿ ಹಾದಿ ತಪ್ಪಿದ
ಲೋಲ ಸಖಿಯರ ತರುಣನಿವ ತಾ
ಸಾಲ ತೀರಿಸೆ ಪಾಂಡು ಪುತ್ರಗೆ ಪ್ರಾಣವನೆ ಕೊಟ್ಟ
ಕಾಲ ಪಥದಲಿ ಮನುಜನಡತೆಯು
ವಾಲಿಪುದಕವಗುಣಗಳೆಲ್ಲವ

ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ||||

ಜಪಾನಿನ ಭೀಕರ ದುರಂತದ ಬಗ್ಗೆ:
--------------------------

ಶಿವನ ಕಾಲ್ತುಳಿತದಲಿ ಅಲೆತಾಂ-
ಡವದ ನಾಟ್ಯಕೆ ಹೆಜ್ಜೆ ಹಾಕಿತೆ?
ಜವನ ಮಹಿಷನೆ ಕಪ್ಪು ಅಲೆಗಳ ರೂಪ ತಾಳಿದನೆs?
ರವಿಯ ಬೆಳಕನೆ ಮಾಸುವಂದದಿ
ಕವಿಸುತಲಿ ಕತ್ತಲೆಯ ನಿಮಿಷದೆ
ಸವೆಸಿದುದು ಜೀವಗಳ ಶರಧಿಯ ಮಂಥನದ ವಿಷವೇ?

ಮಂಗಳವಾರ, ಮಾರ್ಚ್ 15, 2011

ಮಾಘ-ಗಮನ

ಸರಳ ರಗಳೆ:
ಅತಿ ಸುಲಭವಾದ ಛ೦ದೋಬ೦ಧ. ೫ ಮಾತ್ರೆಗಳ ೪ ಗಣಗಳು ಪ್ರತಿ ಸಾಲಿನಲ್ಲಿ...ಆದಿ-ಅ೦ತ್ಯ ಪ್ರಾಸದ ರಗಳೆ ಇಲ್ಲವಾದ್ದರಿ೦ದ...ಇದು ಸರಳ ರಗಳೆ :-)

ಹೊದೆದ ಕ೦ಬಳಿಸರಿದು ಹಿಮದಹನಿ ಕರಗಿರಲು
ಎಲೆರಾಶಿಯೆಲ್ಲೆಲ್ಲು ಭೂಗವಚದ೦ತಿರಲು
ಕೊರಳ ಕೋಗಿಲೆ ಕೊಡವಿ ದು೦ಬಿ ಮೈಮುರಿದಿರಲು
ಕಳೆಯುತಿದೆ ಮಾಘ ಜಗಕಾದಿಹುದು ಹೊಸತನಕೆ.

ಭಾನುವಾರ, ಮಾರ್ಚ್ 13, 2011

ಹತ್ತು ವರ್ಷದ ಹಿಂದೆ - ಮತ್ತೊಮ್ಮೆ ... ಭಾಮಿನಿ ಷಟ್ಪದಿಯಲ್ಲಿ

ಹಳೆಯ ಕವಿತೆಗಳನ್ನು ಬದಲಿಸಿ ಬರೆದರೆ ಅಭ್ಯಾಸವಗುತ್ತದೆಂದು ಗಣೇಶ್ ಹೇಳಿದ್ದರಿಂದ, ನರಸಿಂಹ ಸ್ವಾಮಿಯವರ "ಹತ್ತು ವರ್ಷದ ಹಿಂದೆ" ಕವಿತೆಯನ್ನು ಮರಳಿ ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ವಿಷಯವು ಒಮ್ಮೊಮ್ಮೆ ಮೂಲಕ್ಕಿಂತ ಬೇರೆ ದಾರಿಯಲ್ಲಿ ಹೋಗಿರಬಹುದು ::


ಹತ್ತು ವರ್ಷದ ಮುನ್ನ ತೇರಲಿ
ಸುತ್ತಮುತ್ತೋಡಾಡುತಿದ್ದಿರಿ
ಹತ್ತಿರದ ಹೆಣ್ಣೆಂದು ಮೆಚ್ಚುತ ಮುತ್ತನೊತ್ತಿದಿರಿs ||
ಕತ್ತನೆತ್ತದ ಭಯದ ಭರ ನಾ -
ಚುತ್ತ ಕರಗುತ ಕೆಂಪಡರಿ ಮನೆ -
ಯತ್ತ ಓಡಲು ಕೆನ್ನೆಗೆರಡನು ಕೊಟ್ಟರದು ಹದನs || ೧ ||


ಮನೆಗೆ ಹಿರಿಯರ ಕೂಡಿ ಬಂದವ -
ರೆನಗೆ ಉಡುಗೊರೆಯೊಂದ ತಂದು ಲ -
ಗನದ ಮಾತಾಡಿದಿರಿ ಗೆಲುವನು ಹರಡಿದಿರಿ ಬಹುಳ ||
ಇನಿಯರಾದಿರದೊಂದು ಪರಿಯಿಂ -
ದೆನಗೆ ನಚ್ಚನೆ ಸನಿಹ ಬಂದಿರಿ
ಪುನಹ ಪಡೆದಿರಿ ಹೋದ ಮಾನವ ಜೊತೆಗೆ ಹೆಣ್ಣೊಂದs || ೨ ||


ನೆಂಟರೆಲ್ಲರ ಸದರ ಸಡಗರ
ತುಂಟ ಮಕ್ಕಳ ಕೂಟದಾಟಗ -
ಳೆಂಟು ದಿನಗಳ ಮದುವೆ ಸಂಭ್ರಮ ಸಂದ ಸುಮ ಸಮಯ ||
ಅಂಟಿ ಹೊರಟಿತು ಬಾಳ ಬಂಡಿಯು 
[ ಅಂಟಿ ಹೊರಟೆವು ಬಾಳ ಪಥದಲಿ ]
ಬಂಟರೆಲ್ಲರ ಶುಭದ ಹರಕೆಯ
ಸೊಂಟ ಬಾಗಿಸಿ ಪಡೆದ ಹಿರಿಯರ ವರಗಳನುಗ್ರಹದಿs || ೩ ||


ಬಳೆಯು ಮೇಲೇರದೆಲೆ ಮುಂಗೈ -
ಗಳಲಿ ನೋವಾಗಿರಲು ಹಯ್ಯೋ
ಕಳವಳದಿ ಕೆಳಗಿಳಿದು ಬಂದಿರಿ ಚಿಂತೆಯಾಗ್ರಹದಿs ||
ಬಳೆಯ ಸೆಟ್ಟಿಯ ಕುಹಕ ನಗೆಯಿಂ -
ದಳಿದ ತಾಳ್ಮೆಯ ಕೋಪವದು ಮೈ
ಪುಳಕಗೊಳಿಸಿತು ನಿಮ್ಮ ಗೆಳೆತನದುಪರಿ ವಾತ್ಸಲ್ಯ || ೪ ||


ಬೆಟ್ಟಗಳ ಸಾಲಿನಲಿ ಹಾದಿಯು
ಬೆಟ್ಟಗಲದಷ್ಟಿರಲು ಜೊತೆಯಲಿ
ಕಟ್ಟಿಕೊಂಡೋಡಾಡುತಿದ್ದಿರಿ ನನ್ನ ಸಂತಸದಿs ||
ನಿಟ್ಟಿನಲಿ ಮುಂದಾಗಿ ನಡೆದಿರಿ
ಬಿಟ್ಟಿರದೆ ಕಣಿವೆಯಲಿ ಹಿಂಗಡೆ -
ಯೊಟ್ಟು ತಿರುಗುತಲೊಟ್ಟು ನಲಿಯುತ ಕೂಡೆ ಸಂಗಡಣೆ || ೫ ||


ಸಿರಿತನದಿ ಬಡತನದಿ ಯಾರೇ
ಇರಲಿಯಾರಿರದಿರಲಿ ಸಮದಿಂ
ಮೆರೆದಿರೆದರದೆ ದೊರೆಯ ತರದಲಿ ಧೀರ ನಿಲುವಿನಲಿs ||
ಸರಿಗನಿಗೆ ಒಪ್ಪಾಗಿ ಕಂದದ
ಮರಿಗೆ ನಾ ದಿಕ್ಕಾಗಿ ಜೊತೆಯ -
ಲ್ಲಿರಲು ಸಂಗಡ ಪಯಣಿಸುವ ನಾವ್ ತುಂಬು ಜೀವನದಿs || ೬ ||

- ರಾಮಚಂದ್ರ