ಸೋಮವಾರ, ಮಾರ್ಚ್ 21, 2011

ನೆನಪಿನಾs ಹಾಯಿ-ದೋಣಿಯಾನ
ಹಗುರಾಗಿಸಲೆಮ್ಮಯ ಮನ-ವನವನನುದಿನ

ಎಂದೋ ಉಂಡ ಹನಿಜೇನ ಸವಿ,
ಜೇನಹೊಳೆಯಲಿ ಮಿಂದರೂ
ಸೊಗಯಿಸದು ನಮಗಿಂದು
ಏಕಾಯಿತು ಹೀಗೆ? ಏನಾಯಿತು ನಮಗೆ?
ಧರೆಯ ವೇಗದಲಿ ಇಂತಿಷ್ಟು ಬದಲಿಲ್ಲ
ಬ್ರಹ್ಮಾಂಡ ತಿರುತಿರುಗಿದರೂ ವೇಗದರಿವಿಲ್ಲ
ಬಂಡಿಯೊಳಿದ್ದು ಅನಂತದಲ್ಲಿ ದಿಟ್ಟಿಸುವವೋಲ್-
ನೋಟವಿರಲೆಮಗೆ ಆಗೆಲ್ಲವೂ ಸ್ತಬ್ದ, ನಿಶ್ಶಬ್ದ;
ಮನ-ವನವನಾವರಿಸುವುದು ಮೌನ,
ಆಗಲೇ ಶಾಂತಿ, ಶಾಂತಿ, ಶಾಂತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ