ನಮ್ಮ ಬಗ್ಗೆ

೨೦೧೧ ನೇ ಇಸವಿಯ ಶುರುವಿನಲ್ಲಿ ಕಾವ್ಯಕವಿತೆಗಳಲ್ಲಿ ಆಸಕ್ತರಾದ ಗೆಳೆಯರಿಗೆ ಶತಾವಧಾನಿ ಡಾ|| ರಾ. ಗಣೇಶ ರವರು ಛಂದಸ್ಸು ಹಾಗು ಪದ್ಯ ರಚನೆಯ ವಿಷಯಗಳನ್ನು ಕಲಿಸಿಕೊಟ್ಟರು. ಅನೇಕ ವಾರಗಳ ಅಂತರದಲ್ಲಿ ಈ ಕಲಿಕೆ ಮುಂದುವರಿದಿದ್ದು, ಪದ್ಯ ರಚನೆಯನ್ನು ಅಭ್ಯಾಸ ಮಾಡಿ, ಗೆಳೆಯರೊಂದಿಗೆ ಹಂಚಿಕೊಂಡು, ಅವರ ಅಭಿಪ್ರಾಯಗಳನ್ನೂ, ಸಲಹೆಗಳನ್ನೂ ಅಳವಡಿಸಿಕೊಂಡು ಉತ್ತಮ ಪದ್ಯ ರಚನಕಾರರಾಗಬೇಕೆಂಬುದು ನಮ್ಮೆಲ್ಲರ ಆಶಯ.

ಈ ನಿಟ್ಟಿನಲ್ಲಿ, ಮಿತ್ರರೆಲ್ಲರೂ ಬರೆದ ಛಂದೋಬದ್ಧ ಪದ್ಯಗಳನ್ನೂ, ಕವಿತೆಗಳನ್ನೂ ಹಂಚಿಕೊಳ್ಳುವುದಕ್ಕೋಸ್ಕರ ಈ ಬ್ಲಾಗನ್ನು ಶುರುಮಾಡಿದ್ದೇವೆ.

ನಾವೆಲ್ಲರೂ ಬೆಂಗಳೂರಿನಲ್ಲಿ ನೆಲೆಸಿದ್ದು, ವಿವಿಧ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿದ್ದೇವೆ.