ಇದು ಸೋಮ ಪದ್ಯ ಮೂಲಕ ಕೇಳಿದ ಪ್ರಶ್ನೆಗೆ ಒಂದು ಉತ್ತರ ::
ತಂದೆ ತಾತರು ಪಿತೃಗಳೆಲ್ಲರು
ತಂದ ಪೂರ್ವಾಪರದ ಗತಿಗಳ
ಮುಂದುವರಿಸಿದ ತಳಿಯ ಪುಣ್ಯದ ಜನುಮವೆಮ್ಮಿರವು ||
ಹಿಂದೆ ಕೇಡಿಗರೆದುರು ಹೆದರಿರೆ
ಮುಂದೆ ಕುರುಗಳ ಕ್ಷೇತ್ರ ಯುದ್ಧದಿ
ತಂದೆ ಸಹಿತದಿ ಹೋರಿ ಮಡಿದವ ಹೇಡಿಯೆಂತಹನು?
[ಇನ್ನೂ ಮುಂದುವರಿಯಲೂ ಬಹುದು :-)]
- ರಾಮಚಂದ್ರ
All the five lines are perfect. Last line needs little nudging.
ಪ್ರತ್ಯುತ್ತರಅಳಿಸಿtamde sahita kAdAdi madidava =3+3+5+4+3+4+2
taMde saMgada hOri madidava hEdiyaaguvanE OR hEdiyeMtahanu? = 3+4+3+4+3+4+2 will make the last line
hohoh...man....its really happening here...let me jump in soon...
ಪ್ರತ್ಯುತ್ತರಅಳಿಸಿgreat going....
ಮೌಳಿ - ನಿಮ್ಮ ಸಲಹೆಗೆ ಧನ್ಯವಾದಗಳು. ಸರಿ ಮಾಡಿದ್ದೇನೆ.
ಪ್ರತ್ಯುತ್ತರಅಳಿಸಿRam,
ಪ್ರತ್ಯುತ್ತರಅಳಿಸಿಬಹಳ ಬಹಳ ಚೆನ್ನಾಗಿದೆ, ತುಂಬಾ ಸಂತೋಷವಾಯ್ತು. ಒಪ್ಪಿದೆ. ನೀವು ಹೇಳಿರೋದು ಸತ್ಯ ವಿರಾಟ ಪರ್ವದ ಸಮಯಕ್ಕೆ ನನ್ನ ಮೊದಲ ಪದ್ಯ ಸರಿಯಿದೆ. ಎರಡನೇದು ಯುದ್ಧ ಪರ್ವಕ್ಕು ಹೇಳ್ತೀನಿ ಕೇಳಿ:
ಬಾಲವಯದಲಿ ಹಾದಿ ತಪ್ಪಿದ
ಲೋಲ ಸಖಿಯರ ತರುಣನಿವ ತಾ
ಸಾಲ ತೀರಿಸೆ ಪಾಂಡು ಪುತ್ರಗೆ ಪ್ರಾಣವನೆ ಕೊಟ್ಟ :(
ಕಾಲ ಪಥದಲಿ ಮನುಜನಡತೆಯು
ವಾಲಿಪುದಕವಗುಣಗಳೆಲ್ಲವ
ಜಾಲಿಸುತ ಹಿರಿಮೆಯನು ಏರಿದ ಉತ್ತರನೆ ಸಾಕ್ಷಿ
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಏನಪ್ಪ ಇದು ಸವಾಲ್-ಜವಾಬ್....
ಪ್ರತ್ಯುತ್ತರಅಳಿಸಿಸೋಮಣ್ಣ ಏನಿದು...ಹಿ೦ಗೆ ಕುಮಾರ್ವ್ಯಾಸನ ತರ ಷಟ್ಪದಿಮೇಲೆ ಷಟ್ಪದಿ....ಹಲಗೆ ಬಳಪವ ಪಿಡಿಯದೆ-ಪದವನಿಟ್ಟಳುಪದೆ ಬರ್ತಾನೇ ಇದೆ.....ಸೂಪರ್....
ಒ೦ದು ಸಣ್ಣ ಬದಲಾವಣೆ,
ಸ೦ಧಿಯಾಗುವಲ್ಲೆಲ್ಲಾ ಮಾಡಲೇಬೇಕೆ೦ಬ ನಿಯಮ ಇದೆ...ಹಾಗಾಗಿ ಕೊನೆಯ ಸಾಲಿನಲ್ಲಿ....ಏರಿದ ಮತ್ತು ಉತ್ತರನೆ ಎರಡು ಪದಗಳು ಪೂರ್ವಪದದೊ೦ದಿಗೆ ಸೇರಬೇಕು...ಹೀಗೆ ಮಾಡಬಹುದು...
"ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ನಾ"
ಶ್ರೀಶ :),
ಪ್ರತ್ಯುತ್ತರಅಳಿಸಿಹವ್ದು "ಜಾಲಿ ಸುತತಾ ಸಾಕ್ಷಿ ಯಾಯಿತು ಹಿರಿಮೆ ಯುತ್ತರ ನಾ" ಸರಿಹೋಗತ್ತೆ ೪ನೆ ಪಾದಕ್ಕೆ
ಜಾಲಿಯಾಗಿದೆ ’ಛಂದ, ಸಂಧಿಯ’
ಪ್ರತ್ಯುತ್ತರಅಳಿಸಿಬೇಲಿಹೊದಿಸುವ ರೀತಿ, ಸಾಕ್ಷಿಯ
ಮೂಲ, ’ಹಿರಿಮೆಯೊ? ಉತ್ತರನೊ?’ ಸಂದೇಹಕೇಡೆಯೇಕೆ?