ಸೋಮವಾರ, ಜುಲೈ 18, 2011

ಹುಣ್ಣಿಮೆ ಚಂದ್ರನ ಬಗ್ಗೆ

ಕಳೆಯೆ ರಾಜ್ಯವು ಯುದ್ಧದಲಿ ತಾ ಬೆಳಕು ಸೋಲಲಿ ಕುಂದಿರಲ್
ಬೆಳಕನಾವರಿಸುತಲಿ ಸೀಮೆಯ ಪಹರೆ ನಡೆಸಿತೆ ಕತ್ತಲೆ?
ಇಳೆಗೆ ಕವಚಿತೆಯಿರುಳ ಬಾಣಲೆ ಹಗಲು ಸೋರಿತೆ ರಂಧ್ರದೋಳ್?
ಛಳಿಗೆಯೊಳಸರೆಸುತಲಿ ಹೊರಮೈ ಬೆಳಕು ಕುಗ್ಗಿತೆ ವೃತ್ತದೋಳ್?
ಇರುಳ ರಾಣಿಗೆ ದೃಷ್ಟಿ ಬೊಟ್ಟೆನೆ ಚಂದ್ರನಿರುವನೆ ನಭದೊಳು?
ತಿರುಳಿನೊಳು ಪರಬಮ್ಮನಿರುವೆನೆ ತಮದ ದೆಹಾವೃತದೊಲು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ