ಶುಕ್ರವಾರ, ಜುಲೈ 15, 2011

ಹಂಪೆ - ೨

ವಾಲಿ ಸುಗ್ರೀವಾದಿ ವಾನರ
ಪಾಲಕರ ಕಿಷ್ಕಿಂಧೆ ನಾಡಿದು
ಬಾಲಕನು ಹುಟ್ಟಿದ್ದುದಂಜನದೇವಿಗಿಲ್ಲೆಂದು ||
ವಾಲಿಯಾ ಭಯದಿಂದ ತಮ್ಮನು
ಕಾಲ ಕಳೆದನು ಬಂಟರೊಡನೆಂ
ಪೇಳುವರು ಹೊಂಚಿದ್ದುದನು ಮಾತಂಗ ಪರ್ವತದಿ || ೧ ||

ನದಿಯು ಪಂಪೆಯು, ತುಂಗಭದ್ರೆಯೆ
ಯದರ ಬಳಿಯಲೆ ಋಷ್ಯಮೂಕವ -
ದೆದುರು ಆನೆಯಗುಂದಿಯೆಡೆ ಪಂಪಾಸರೋವರವು ||
ಕದಿದು ರಾವಣನೊಯ್ಯೆ ಸೀತೆಯು
ವೊದಗಿದಾಗೊಗೆದಿದ್ದ ತೊಡವ -
ನ್ನದನು ಬಿದ್ದಾ ಕಾಯ್ದ ತಾಣವನಿಲ್ಲೆ ತೋರುವರು || ೨ ||

ಕೊಂದು ವಾಲಿಯ ರಾಮಚಂದ್ರನು
ತಂದು ಸುಗ್ರೀವನನು ರಾಜನ
ನಂದು ಮಾಡಿಸಿ ನುಳಿದ ಬೆಟ್ಟದಿ ಮಾಲ್ಯವಂತದಲಿ ||
ಹಿಂದೆ ರಾಮಾಯಣದಲಾ ಕಿ -
ಷ್ಕಿಂಧೆ ಕಾಂಡದ ತಾಣಗಳನಾ
ವಿಂದು ಕಂಡರೆ ಮೂಢರಾ ನಂಬಿಕೆಗಳೋ ನಿಜವೋ? || ೩ ||

~ * ~ * ~ * ~

ಇಸವಿ ಹದಿಮೂರ್ನೂರ ಆರಲಿ
ನಸಿದ ಹತ್ತಿಪ್ಪತ್ತು ವರ್ಷಗ -
ಳಸುರ ಪೀಡೆಯು ದಕ್ಷಿಣಕು ಬಡಿದಿದ್ದ ದುರ್ದಿನಗಳ್ ||
ಮುಸಲ ಖಿಲ್ಜಿಯು ದಿಲ್ಲಿಯಲಿ ತಾ -
ನೆಸಗಿ ದಬ್ಬಾಳಿಕೆಯ ಬಲು ನಂ -
ದಿಸಲು ಕ್ಷತ್ರಿಯ ಶಕ್ತಿಯನು ನುಗ್ಗಿದನು ದಕ್ಷಿಣಕೆ || ೪ ||

ಮಲ್ಲಿಕಾಫರನವನ ಬಂಟನ -
ದಿಲ್ಲಿ ಬಂದಕ್ಕಿಸಿದ ಕ್ರೂರಿಯು
ಹಲ್ಲು ಮಸೆಯುತ ನುಂಗಿದಾ ಚೆದುರಿದ್ದ ರಾಜ್ಯಗಳಾ ||
ಇಲ್ಲದಿರೆಯೊಗ್ಗಟ್ಟದಿವರಲಿ
ಸಲ್ಲುವುದೆ ರಾಜ್ಯಗಳ ರಕ್ಷಣೆ
ಕಲ್ಲು ಸಕ್ಕರೆ ಕಠಿನವಲ್ಲವೆ ಹುಡಿಗೆ ಹೋಲಿಸಿರೆ || ೫ ||

ಸೋಲಿಸಿದನಾ ದೇವಗಿರಿಯ -
ನ್ನಾಳುತಿರ್ದಾ ಯಾದವರ ಮುಂ -
ಬೀಳಿಸಿದನವನೊರಂಗಲ್ಲಿನ ಕಾಕತೀಯರನು ||
[ಕೀಳು ರಾಮೆಶ್ವರವ ಗೆಡಿಸಿ]
ಕೀಳುಗೆಡಿಸುತ ರಾಮಸೇತುವ
ಗಾಳಿಸಿ ಶ್ರೀರಂಗ ಮಧುರೆಯ
ತೋಳ ಕುರಿಯಂ ಮುರಿದವೋಲಾ ದೋರಸಂದ್ರವನು [ದ್ವಾರಸಮಂದರಮಂ] ||‌ ೬ ||

ಹಿಂದು ಶಕ್ತಿಯ ದಕ್ಷಿಣದಲೀ
ಮುಂದೆ ನುಗ್ಗಿದ ಯವನ ಶಕ್ತಿಯು
ಬಂಧಿಸುತ ಕೊನೆಗೊತ್ತುವಂತೆಯೆ ತೋರಿದಾ ದಿನಗಳ್ ||
ಬೆಂದು ಬಳಲಿದ ಹೊಯ್ಸಳರ ಕುಲ
ನಂದುತಿರ್ದಂತೆಯೆಲೆ ಹುಟ್ಟಿದು -
ದಂದು ವಿದ್ಯಾರಣ್ಯ ಪ್ರೇರಿತ ಸಂಗಮರ ಯುಗವು || ೭ ||

- ರಾಮಚಂದ್ರ

1 ಕಾಮೆಂಟ್‌: